Wednesday, November 17, 2021

 ಒಂಭತ್ತನೇ ತರಗತಿಯ ನವಾಗತ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.

ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಸ್ವಾಗತಿಸಿ ಮಾತನಾಡಿದರು.

ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್  ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶ್ರೀ ಶಶಿಕುಮಾರ್ ಪಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.

ತರಗತಿ ಅಧ್ಯಾಪಿಕೆಯರಾದ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ, ಶ್ರೀಮತಿ ಉಷಾಪದ್ಮ ಜಿ, ಶ್ರೀಮತಿ ತುಳಸಿ ಕೆ ಉಪಸ್ಥಿತರಿದ್ದರು.

ಶ್ರೀ ಪ್ರಶಾಂತ ಹೊಳ್ಳ ಎಂ ಕಾರ್ಯಕ್ರಮ ನಿರೂಪಿಸಿದರು.




Sunday, November 14, 2021


 

 NAS 2021 @ SDPHSS DHARMATHADKA teaching faculties







 SDPHSS DHARMATHADHA

25/10/2021
ಶಾಲಾ ಪುನರಾರಂಭದ ಅಂಗವಾಗಿ, ರಕ್ಷಕ- ಶಿಕ್ಷಕ ಮಹಾಸಭೆಯನ್ನು ದಿನಾಂಕ 25/10/2021ರಂದು ಸೇರಲಾಯಿತು.
ರಕ್ಷಕ- ಶಿಕ್ಷಕ ಸಮಿತಿಯ ಮಹಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲೆಯ ವ್ಯವಸ್ಥಾಪ ಶ್ರೀ ಎನ್ ಶಂಕರನಾರಾಯಣ ಭಟ್ ಹಾಗೂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.
ಮಾತೃ ರಕ್ಷಕ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಉಪಸ್ಥಿತರಿದ್ದರು.
ಪುತ್ತಿಗೆ ಪಂಚಾಯತ್ ಆರೋಗ್ಯ ಇಲಾಖೆಯ JPHN ಆಗಿರುವ ಲೆಬಿತ ಆರೋಗ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಸೌಮ್ಯ ಎಂ ಪ್ರಾರ್ಥನೆ ಹಾಡಿದರು.
ಶ್ರೀ ರಾಮಕೃಷ್ಣ ಭಟ್ ಸ್ವಾಗತಿಸಿ, ಶ್ರೀ ಉಣ್ಣಿಕೃಷ್ಣ ಧನ್ಯವಾದ ಸಮರ್ಪಿಸಿದರು.
ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ಪ್ರಶಾಂತ ಹೊಳ್ಳ ಎನ್ ನಿರೂಪಣೆಯಲ್ಲಿ ಸಹಕರಿಸಿದರು.







ಲೇಖಕಿ ಶ್ರೀಮತಿ ಪ್ರಸನ್ನ ವಿ ಚೆಕ್ಕೆಮನೆ ಇವರು  ತಮ್ಮ ನೀಲಾಂಬರಿ(ಕಥಾಸಂಕಲನ

ಹಾಗೂ ತುಳಸೀಹಾರ(ಕಾದಂಬರಿ) ಎಂಬೀ ಕೃತಿಗಳನ್ನು ನಮ್ಮ ಶಾಲೆಯ ಗ್ರಂಥಾಲಯಕ್ಕೆ ಗೌರವಪೂರ್ವಕವಾಗಿ ನೀಡಿದರು


..

ಧನ್ಯವಾದಗಳು






ನವಾಗತ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

 SDPHSS DHARMATHADKA

10/11/2021
ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆ ಹೇಳಿದರು.
ಶಿಕ್ಷಕರಾದ ಶ್ರೀ ಕೆ ರಾಮಕೃಷ್ಣ ಭಟ್, ಉಷಾ ಕೆ ಆರ್ ಉಪಸ್ಥಿತರಿದ್ದರು.
ಮಾತೃ ರಕ್ಷಕ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯೆ ವಸಂತಿ ಎಂ ಉಪಸ್ಥಿತರಿದ್ದರು.
ಪ್ರಸ್ತುತ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳ ಕಲಿಕೆಯ ಕುರಿತಾಗಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ, ಶ್ರೀಮತಿ ಶ್ವೇತ ಕುಮಾರಿ ಎಂ ಹಾಗೂ ಶ್ರೀಮತಿ ಸೌಮ್ಯ ಎಂ ಪ್ರಾರ್ಥಿಸಿ
ಶ್ರೀಮತಿ ವಿದ್ಯಾಸರಸ್ವತಿ ಸ್ವಾಗತಿಸಿ, ಶ್ರೀ ಶಶಿಧರ ಕೆ ಧನ್ಯವಾದ ಸಮರ್ಪಿಸಿದರು.
ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ಪ್ರಶಾಂತ ಹೊಳ್ಳ ಎನ್ ನಿರ್ವಹಿಸಿದರು.










 SDPHSS DHARMATHADKA

10/11/2021
ಎಂಟನೇ ತರಗತಿಯ ಇಂಗ್ಲಿಷ್ ಮಾಧ್ಯಮದ ನವಾಗತ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಸ್ವಾಗತಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕರಾದ ಶ್ರೀ ಕೆ ರಾಮಕೃಷ್ಣ ಭಟ್, ಸುನಿತಾ ಕೆ ಹಾಗೂ ಈಶ್ವರಿ ಡಿ ಉಪಸ್ಥಿತರಿದ್ದರು.







SDPHSS DHARMATHADKA

08/11/2021


ಎಂಟನೇ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರವೇಶೋತ್ಸವ ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.


ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.


ಧರ್ಮತ್ತಡ್ಕ ಆಯುರ್ವೇದ ವೈದ್ಯೆ ಶ್ರೀಮತಿ ಸೀತಾ ಲಕ್ಷ್ಮಿ ಆರೋಗ್ಯ ಸಂರಕ್ಷಣೆ, ಹಾಗೂ ಆಯುರ್ವೇದದ ಔಷಧಿಯ ಮಹತ್ವ ವಿವರಿಸಿದರು








 School Fumigated by Aparajithadoopa Churna provided by Govt Ayurvedic Dispensary Dhharmathadka after first days class







 ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ.

29_10_2021
ನಮ್ಮ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದ ಶ್ರೀಮತಿ ಪ್ರಮೀಳಾ ಟೀಚರ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉನ್ನತ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್ ರಾಮಚಂದ್ರ ಭಟ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್
ಧರ್ಮತ್ತಡ್ಕ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಎನ್ ಮಹಾಲಿಂಗ ಭಟ್, ಧರ್ಮತ್ತಡ್ಕ ಎಯುಪಿ ಶಾಲೆಯ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಹಾಗೂ ಶ್ರೀಮತಿ ಉಷಾ ಕೆ ಆರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಿವೃತ್ತ ಅಧ್ಯಾಪಿಕೆಯಾದ ಶ್ರೀಮತಿ ಪ್ರಮೀಳಾ ಟೀಚರ್ ಅವರಿಗೆ ಸ್ಮರಣಿಕೆ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಸುಸಂದರ್ಭದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಯ ಅಧ್ಯಾಪಕ ವೃಂದ ಸೇರಿದ್ದರು.
ಕಾರ್ಯಕ್ರಮದ ಪ್ರಾರ್ಥನೆಯಲ್ಲಿ ಅಧ್ಯಾಪಕರಾದ ರಾಜಕುಮಾರ್ ಕೆ, ಪ್ರದೀಪ ಕೆ ಶಿವಪ್ರಸಾದ ಸಿ, ಪ್ರಶಾಂತ ಹೊಳ್ಳ ಎನ್, ಶಶಿಧರ ಕೆ, ಸೂರ್ಯನಾರಾಯಣ ಭಟ್ ಪಿ ಸಹಕರಿಸಿದರು.
ಶ್ರೀಮತಿ ಶಿಲ್ಪ ಬಿ ಎನ್ ಸ್ವಾಗತಿಸಿ, ಶಿವಪ್ರಸಾದ್ ಸಿ ಹಾಗೂ ಪ್ರಶಾಂತ ಹೊಳ್ಳ ಎನ್ ನಿರೂಪಣೆಗೈದರು, ಶ್ರೀಮತಿ ಉಷಾ ಕೆ ಆರ್ ವಂದಿಸಿದರು.










ಅಭಿನಂದನಾ ಕಾರ್ಯಕ್ರಮ




ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ.
2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆ ಯಲ್ಲಿ ಉನ್ನತ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಇಂದು ಶಾಲೆಯಲ್ಲಿ ಜರಗಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದ 31 ವಿದ್ಯಾರ್ಥಿಗಳನ್ನು ಹಾಗೂ ಒಂಭತ್ತು ವಿಷಯಗಳಲ್ಲಿ A+ ಪಡೆದ 18 ವಿದ್ಯಾರ್ಥಿಗಳನ್ನು ಮತ್ತು ಹೈಯರ್ ಸೆಕೆಂಡರಿ ಶಾಲೆಯ ವಾಣಿಜ್ಯ ವಿಭಾಗ , ಹ್ಯುಮಾನಿಟೀಸ್ ವಿಭಾಗದಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸುಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಅಶೋಕನ್ ಅವರ ಹೆತ್ತವರಾದ ಶ್ರೀಮತಿ ನಾರಾಯಣಿ ಅಮ್ಮ ಹಾಗೂ ಶ್ರೀ ಕಣ್ಣನ್ ಅವರ ಸ್ಮರಣಾರ್ಥ ನಗದು ಹಾಗೂ ಸ್ಮರಣಿಕೆಯನ್ನು ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಇದರೊಂದಿಗೆ ಮೇಪೋಡು ಶ್ರೀ ಸುಬ್ರಾಯ ದತ್ತಿನಿಧಿಯನ್ನು ಕನ್ನಡ ಮಾಧ್ಯಮದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು PTA ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಎನ್ ವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತಾಡಿದರು.
ಇದರೊಂದಿಗೆ ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಎನ್ ರಾಮಚಂದ್ರ ಭಟ್, ಯುಪಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಎನ್ ಮಹಾಲಿಂಗ ಭಟ್, ಯುಪಿ ಶಾಲೆಯ ವ್ಯವಸ್ಥಾಪಕರಾದ ಶ್ರೀಮತಿ ವಿಜಯ ಶ್ರೀ, ಹೈಯರ್ ಸೆಕೆಂಡರಿ ಶಿಕ್ಷಕರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಪ್ರೌಢ ಶಾಲೆಯ ಶಿಕ್ಷಕರಾದ ಶಶಿಕುಮಾರ್ ಪಿ, PTA ಉಪಾಧ್ಯಕ್ಷ ಶ್ರೀ ಜೋನ್ ಡಿ ಸೋಜ, MPTA ಶ್ರೀಮತಿ ಜಲಜಾಕ್ಷಿ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಈಶ್ವರಿ ಡಿ ಪ್ರಾರ್ಥಿಸಿ, ಶ್ರೀಮತಿ ಉಮಾದೇವಿ ಎಂ ಎಲ್ ಸ್ವಾಗತಿಸಿ, ಶ್ರೀಮತಿ ಶ್ವೇತ ಕುಮಾರಿ ಎಂ ವಂದಿಸಿದರು, ಶಿವಪ್ರಸಾದ್ ಸಿ ಹಾಗೂ ಪ್ರಶಾಂತ ಹೊಳ್ಳ ಎನ್ ನಿರೂಪಣೆಯಲ್ಲಿ ಸಹಕರಿಸಿದರು.













.

ಮಹಾತ್ಮ ಗಾಂಧೀಜಿ

 ಮಹಾತ್ಮ ಗಾಂಧೀಜಿ ಅವರ 152 ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.

ಪರಿಸರದ ಸ್ವಚ್ಚತೆಯನ್ನು ಅಧ್ಯಾಪಕರು ನಿರ್ವಹಿಸಿದರು.







Monday, July 19, 2021

 2020_21 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ಹಾಗೂ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಕಲಿಕೆಯ ಕುರಿತಾಗಿ ವೆಬಿನಾರ್ 17.07.2021 ಸಂಜೆ 7.30 ಗಂಟೆಗೆ ಜರಗಿತು.







Congratulations to all SSLC Students

 Congratulations to all students for historic achievement in the SSLC Exam ,March 2021,during this covid pandemic.Heartful of thanks to everyone behind this success, Especially Parents,HM and all the staff.180 out of 180 Students Eligible for Higher studies.31 students got full A+,18 students just missed in one subject and got 9 A+.All the best for future studies.




Tuesday, February 23, 2021

ಆರೋಗ್ಯ ಇಲಾಖೆಯ ತರಗತಿ

 Covid ಸಂದರ್ಭದಲ್ಲಿ SSLC ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ಕೈಗೊಳ್ಳಬೇಕೆಂಬ ತರಗತಿಯನ್ನು ಆರೋಗ್ಯ ಇಲಾಖೆಯ ಶ್ರೀಮತಿ ಅಜಿತ(Adolescent Health Councillor - CHC Badiyadka) ಮತ್ತು ರೇಖಾ(School JPHN Puthige Panchayath) ನಡೆಸಿಕೊಟ್ಟರು