Tuesday, October 22, 2019

#ಪ್ರಾಣ_ವಾಯು "
ಜಿಲ್ಲಾ ಮಟ್ಟಕ್ಕೆ...
ಇಂದು ಕಡಂಬಾರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಪ್ರೌಢಶಾಲಾ ಮಕ್ಕಳು ಅಭಿನಯಿಸಿದ ,ಶ್ರೀ Sadashiva Balamithra ಪೊಯ್ಯ ರಚಿಸಿ , ಶಾಲಾ ಅದ್ಯಾಪಕ ಶ್ರೀ Shivu Cherugoli ಮತ್ತು ಶ್ರೀ Sadashiva Balamithraಪೊಯ್ಯ ಜೊತೆಯಲ್ಲಿ ನಿರ್ದೇಶಿಸಿದ, " #ಪ್ರಾಣ_ವಾಯು " ವಿಜ್ಞಾನ ನಾಟಕವು ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ಉತ್ತಮ ನಟಿ ,ಪ್ರಶಸ್ತಿಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಗೊಂಡಿತು.

#ಪ್ರಕೃತಿಯ_ವಿಪರೀತ_ಶೋಷಣೆ_ಬರಡಾಗುತ್ತಿರುವ_ಭೂಮಿ__ದಾಹಜಲ_ಸಿಗದೆ_ಮನುಷ್ಯ_ಮನುಷ್ಯನ_ರಕ್ತ_ಕುಡಿಯುವ_ಜನರು_ಪ್ರಾಣ_ #ವಾಯುವಿಗಾಗಿ_ಪರದಾಡುವ_ಸ್ಥಿತಿ_ಅದಿಲ್ಲದೇ_ಜನರನ್ನು_ಅರ್ದಾಯುಷ್ಯದಲೇ_ಕೊಲ್ಲವ_ಮುಂದಿನ_ಯುಗದ_ಚಿಂತನೆಯೊಂದಿಗೆಮುಂದುವರಿಯುವ#_ನಾಟಕ , ಪ್ರಕೃತಿಯ ನಿಯಮಗಳನ್ನು ಬದಲಾಯಿಸುವ ಸಂಶೋಧನೆ ನಮಗೆ ಬೇಕಾಗಿಲ್ಲ ,ಪ್ರಕೃತಿ ಸ್ನೇಹೀ ಸಂಶೋಧನೆಗಳ ಅಗತ್ಯತೆಯನ್ನು ,ಪ್ರಾಣ ವಾಯು ನಾಟಕದ ಮೂಲಕ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ನಮ್ಮ ಮುದ್ದು ಮಕ್ಕಳು ಯಶಸ್ವಿಯಾದರು. ನಾಟಕದ ಕಥಾ ನಾಯಕಿ ಕಾಡ ಹುಡುಗಿ ಬೆಳ್ಳಿ ಯಾಗಿ ಅಭಿನಯದ ನಿಧಿ .ಅರ್ ಶೆಟ್ಟಿ ಉತ್ತಮ ನಟಿ ಪ್ರಶಸ್ತಿ ಪಡೆದು ತನ್ನ ಅಭಿನಯ ಚತುರತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದಳು
ರಂಗ ಪರಿಕರಗಳಲ್ಲಿ ರಾಜ್ ಕುಮಾರ್ ಮಾಸ್ಟರ್ ಕಾಟುಕುಕ್ಕೆ, ಶಾಲಾ ಅಧ್ಯಾಪಿಕೆ ಶ್ರೀ ಮತಿ ವಿಧ್ಯಾಸರಸ್ವತಿ ಟೀಚರ್ ಸಹಕರಿಸಿದರು.
ವಿಜ್ಞಾನ ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ಪುಟಾಣಿಗಳಿಗೂ ಅಭಿನಂದನೆಗಳು...

Team ."ಪ್ರಾಣವಾಯು"
💥💥Manjeshwer sub dist science drama 💥💥
Winner
First place: SDPHS Dharmathadka

Second place:SVVHSS Miyapadavu
Third place: SVVHSS Kodlamogaru
Congrats......




No comments: