Thursday, August 15, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ದ್ವಜಾರೋಹಣ ಗೈದರು.ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಳ ದ ಅಗ್ನಿ ಶಾಮಕದಳದ ಸಹ ಅಧಿಕಾರಿಯಾದ ಶ್ರೀ ಎ.ಟಿ ಜೋರ್ಜ್ ಅವರು ಸ್ವಾತಂತ್ರ್ಯ ದ ಮಹತ್ವ ಹಾಗೂ ಅಗ್ನಿ ಶಾಮಕದಳದ ರಕ್ಷಣಾ ಕಾರ್ಯ ದ ಬಗ್ಗೆ ತಿಳಿಸಿದರು.
ಕಾರ್ಯ ಕ್ರಮ ದಲ್ಲಿ ಉಪಸ್ತಿತರಿದ್ದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಉಳುವಾನ ಶ್ರೀ ರಾಮಚಂದ್ರ ಭಟ್ ಮಾತನಾಡಿ ಸ್ವಾತಂತ್ರ್ಯ ಬಲಿದಾನಿಗಳಾದ ದೇಶಪ್ರೇಮಿಗಳನ್ನು ನೆನೆದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದರು.ಶಾಲಾ ವ್ಯವಸ್ಥಾಪಕ ರಾದ ಶ್ರೀ ಶಂಕರನಾರಾಯಣ ಭಟ್ ,ಹೈಯರ್ ಸೆಕಂಡರಿ ಶಾಲೆಯ ಅದ್ಯಾಪಕ ರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು ಶುಭಾಶಂಸನೆ ಗೈದರು .
ಅದ್ಯಾಪಕರಾದ ಶ್ರೀ ಗೋವಿಂದ ಭಟ್ ನಿರೂಪಿಸಿ ಶ್ರೀ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.










No comments: