Monday, June 20, 2016


ವಾಚನಾ ವಾರ- ಪಿ.ಎನ್. ಪಣಿಕ್ಕರ್ ಚರಮದಿನ
ಶ್ರೀಯುತ ಪಿ.ಎನ್.ಪಣಿಕ್ಕರ್ 1909 ಮಾರ್ಚ್ 1 ರಂದು ಗೋವಿಂದ ಪಿಳ್ಳೆ ಮತ್ತು ಜಾನಕಿ ಅಮ್ಮ ರವರ ಪುತ್ರನಾಗಿ ಕೇರಳದ ಕೋಟ್ಟಾಯಂ ಜಿಲ್ಲೆಯ ನೀಲಂಪೇರೂರುನಲ್ಲಿ ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಅವರು ತನ್ನ ಬಾಲ್ಯ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಅನುಭವಿಸಿದ ಪುಸ್ತಕಗಳ ಕೊರತೆ ಮುಂದಿನ ಸಮಾಜಕ್ಕೆ ಉಂಟಾಗ ಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಸನಾತನ ಧರ್ಮಂ ಲೈಬ್ರೆರಿಯನ್ನು ತನ್ನ ಹುಟ್ಟೂರಲ್ಲಿ 1926ರಲ್ಲಿ ಆರಂಭಿಸಿದರು.
ಶ್ರೀಯುತ ಪಣಿಕ್ಕರ್ ರವರು 1945 ರಲ್ಲಿ ತಿರುವಿತಾಂಕೂರು ಗ್ರಂಥಶಾಲಾ ಸಂಘಂ
( Travancore Library Association)ಸ್ಥಾಪಿಸಿ 47 ಗ್ರಾಮೀಣ ಲೈಬ್ರೆರಿಗಳನ್ನು ಸ್ಥಾಪಿದರು. ಸಂಘದ ಘೋಷಣಾ ವಾಕ್ಯವೇ "ಓದಿರಿ ಮತ್ತು ಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿ ಕೇರಳ ರಾಜ್ಯದ ಉದಯವಾದಾಗ ಇದು ಕೇರಳ ಗ್ರಂಥಶಾಲಾ ಸಂಘವಾಗಿ ಗರೂಪೀಕರಣಗೊಂಡಿತು.
. ಶ್ರೀಯುತ ಪಿ.ಎನ್ ಪಣಿಕ್ಕರ್ ಓದುವಿಕೆಯ ಅಗತ್ಯ ಮತ್ತು ಗ್ರಂಥಾಲಯ ಗಳ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಾ ಕೇರಳ ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಒಟ್ಟುಗೂಡಿಸಿ ಅಲ್ಲಲ್ಲಿ ಲೈಬ್ರೆರಿ ಸ್ಥಾಪಿಸಲು ಪ್ರೇರಣೆ ನೀಡಿದರು. ಇದರಿಂದ ಪ್ರೇರೇಪಿತರಾಗಿ ಸಾಧಾರಣ 6000 ಲೈಬ್ರೆರಿಗಳು ಶೃಂಖಲೆಯಲ್ಲಿ ಸೇರಿದವು.
1975ರಲ್ಲಿ ಯುನೆಸ್ಕೋ (UNESCO) ಸಂಸ್ಥೆಯಿಂದ ಕೇರಳ ಗ್ರಂಥಶಾಲಾ ಸಂಘಕ್ಕೆ ಕೃಪಾಸಖಾಯ ಅವಾರ್ಡ್ ಲಭಿಸಿತು. ಶ್ರೀಯುತ ಪಿ.ಎನ್. ಪಣಿಕ್ಕರ್ ರವರು .1977 ತನಕ ಸುಧೀರ್ಘ 32 ವರ್ಷಗಳ ಕಾಲ ಗ್ರಂಥಶಾಲಾ ಸಂಘದ ಪ್ರಧಾನ
ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1977ರಲ್ಲಿ ಗ್ರಂಥಶಾಲಾ ಸಂಘವು ಕೇರಳ ಸರಕಾರದ ಆಧೀನಕ್ಕೆ ಸೇರಿತು. ನಂತರ ಸಂಘವನ್ನು ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ( Kerala State Library Coucil)ಎಂದು ಹೆಸರಿಸಿ ಪ್ರಜಾಪ್ರಭುತ್ವ ಚೌಕಟ್ಟು ನೀಡಿ ಹಣಕಾಸು ನೆರವು ನೀಡಲಾರಂಬಿಸಿತು.
1977ರಲ್ಲಿ ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫಾರ್ಮಲ್ ಎಜುಕೇಶನ್ ಎಂಡ್ ಡೆವೆಲಪ್ ಮೆಂಟ್ ( ) ಸ್ಥಾಪಿಸಿದರು. ಇದು ಕೇರಳ ಸಾಕ್ಷರತಾ ಮಿಷನ್ ಆರಂಭಕ್ಕೆ ನಾಂದಿ ಹಾಡಿತು.
ಪಿ.ಎನ್ ಪಣಿಕ್ಕರ್ ರವರು 1995 ಜೂನ್ 19ರಂದು ಅವರ 86 ನೇ ವಯಸ್ಸಿನಲ್ಲಿ ವಿಧಿವಶರಾದರು. ಅವರ ಗೌರವಾರ್ಥ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಸ್ಮರಣೆಗಾಗಿ ಕೇರಳ ಸರಕಾರ ಪ್ರತೀ ವರ್ಷ ಜೂನ್ 19ರಂದು ಎಲ್ಲಾ ಶಾಲೆ,ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ದಿನ ( Reading Day)ವಾಗಿಯೂ ಅಂದಿನಿಂದ ಒಂದು ವಾರದ ತನಕ ವಾಚನಾ ಸಪ್ತಾಹ ಆಚರಿಸುತ್ತಾ ಮಕ್ಕಳಲ್ಲೂ ಸಾರ್ವಜನಿಕರಲ್ಲೂ ಓದಿನ ಮಹತ್ವವನ್ನು ನೆನಪಿಸಿ ಸಾಹಿತ್ಯ ಲೋಕದೆಡೆಗೆ ಆಕರ್ಷಿಸುವ ಪ್ರಯತ್ನ ನಡೆಸಲು ಪ್ರೋತ್ಸಾಹಿಸುತ್ತದೆ
 Paper Presentation by DEEKSHA S ( X C)

No comments: