Tuesday, October 22, 2019

#Manjeshwer_sub_dist_Chess💐💐💐💐
Sub juniour boys Kalandar 1 st.
Winner

Juniour boys Yajnesha 2 nd

ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ದಲ್ಲಿ ಜರಗಿದ ಶಾಸ್ತ್ರ ಮೇಳದ ದೃಶ್ಯ.....








ಕೇರಳ ಸ್ಕೌಟ್ ಅಂಡ್ ಗೈಡ್ ಧರ್ಮತ್ತಡ್ಕ ಯೂನಿಟ್ ನ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಶಿಬಿರ .
ವಿದ್ಯಾರ್ಥಿಗಳ ಸಹಾಯವಾಣಿ child line ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಸಮಸ್ಯೆಗಳ ಬಗೆಗಿನ ಜಾಗೃತಿ ತರಗತಿಯನ್ನು ನಡೆಸಲಾಯಿತು. ಚೈಲ್ಡ್ ಲೈನ್ ಕಾಸರಗೋಡು ತಂಡದ ಸದಸ್ಯರಾದ ಶ್ರೀ ಆನಂದ ಮತ್ತು ಶ್ರೀಮತಿ ರಮ್ಯಾ ತರಗತಿ ನಡೆಸಿಕೊಟ್ಟರು.ಸಂಸ್ಥೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ , ಅಧ್ಯಾಪಕರಾದ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.
ಶಾಲಾ ಮುಖ್ಯೋಪಾಧ್ಯಾಯರಾದ ಇ. ಎಚ್ ಗೋವಿಂದ ಭಟ್ ಸ್ವಾಗತಿಸಿ, ಗೈಡ್ ಅಧ್ಯಾಪಕಿ ಶ್ರೀಮತಿ ವಿಚೇತ ಲೋಕೇಶ್ ನಿರೂಪಿಸಿ, ಸ್ಕೌಟ್ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.
ಅಧ್ಯಾಪಕರಾದ ಪ್ರದೀಪ್ ಕರ್ವಾಜೆ,ಶಶಿಕುಮಾರ್ ಪಿ,ಪ್ರಶಾಂತ ಹೊಳ್ಳ ಎನ್,ರಾಜಕುಮಾರ ಕೆ, ಕೇಶವಪ್ರಸಾದ ಎಡಕ್ಕನ ಸಹಕರಿಸಿದರು







ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೂರು ದಿನಗಳ ಆವಾಸಿಯ ಸಂಸ್ಕೃತ ಶಿಬಿರ ಶ್ರಿ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಉದ್ಘಾಟನೆ ಗೊಂಡಿತು.
ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಜೆ ಉದ್ಘಾಟಿಸಿದರು. ಸಹಾಯಕ ಶಿಕ್ಷಣಾಧಿಕಾರಿ ದಿನೇಶ ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್ ಮಾತಾಡಿ ಶಿಬಿರವು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದರು ಜೊತೆಗೆ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀನಿವಾಸ ಭಟ್ ಮುಖ್ಯ ಅಥಿತಿಗಳಾಗಿ ಮಾತಾಡಿ ಸಂಸ್ಕೃತ ಭಾಷೆಯ ಮಹತ್ವ ತಿಳಿಸಿದರು ಇದೇ ಸಂದರ್ಭದಲ್ಲಿ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.
19 ಶಾಲೆಯ ಆಯ್ದ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು.

ಶಾಲಾ ಮನೇಜರ್ ಶಂಕರನಾರಾಯಣ ಭಟ್,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದ ಭಟ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್, ಎ ಯು ಪಿ ಶಾಲ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.
Glimps of Manjeshwar sub district level Three days residual Sanskrit camp held at sdpahss&aups dharmathadka from 20 September to 22 September.













ಪುತ್ತಿಗೆ ಕೃಷಿ ಭವನದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಕೃಷಿ ಸಂಬಂಧಿ ರಸ ಪ್ರಶ್ನೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದ ದುರ್ಗಾ ಪರಮೇಶ್ವರೀ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ ಗಣಪತಿ ಹಾಗೂ ವಿಶ್ವಜಿತ್ ಕೆ ಶಾಲಾ ಮುಖ್ಯೋಪಾಧ್ಯಾಯರೊಂದಿಗೆ....