Friday, August 16, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಶಾಲೆಯ ಮುಖಾಂತರ ನೇರೆಸಂತ್ರಸ್ತರಿಗೆ ಅಗತ್ಯ ವಾಗುವ ವಸ್ತು ಗಳನ್ನು ಸಂಗ್ರಹಿಸಿ NSS ಘಟಕಕ್ಕೆ ಹಸ್ತಾಂತರಿಸಲಾಯಿತು.

  ಈ ನಿಟ್ಟಿನಲ್ಲಿ ಧರ್ಮತ್ತಡ್ಕ  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ  ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕೇರಳದ ನಾಡಿನಲ್ಲಿ  ಉಂಟಾದ ಭೀಕರವಾದ ದುರಂತದ ಸಂತ್ರಸ್ತರಿಗಾಗಿ
 ಸಹಾಯ ಮಾಡುವ ಸಲುವಾಗಿ ಅಗತ್ಯ ವಸ್ತುಗಳನ್ನು  ಶಾಲೆಯ ವಿದ್ಯಾರ್ಥಿ ಅಧ್ಯಾಪಕರಿಂದ ಸಂಗ್ರಹಿಸಲಾಯಿತು. . ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಶಾಲಾ ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು,  ಶ್ರೀ ಗೋವಿಂದ ಭಟ್, ಶ್ರೀ ಅಶೋಕ ,ಶ್ರೀ ಶಿವಪ್ರಸಾದ್ ಚೆರುಗೋಳಿ, ಶ್ರೀ ರಾಜ್ ಕುಮಾರ್, ಶ್ರೀ ಪ್ರಶಾಂತ್ ಹೊಳ್ಳ ,ಶ್ರೀ ಸಂತೋಷ್ ಕುಮಾರ್,ಶ್ರೀ ಪ್ರದೀಪ್, ಉಣ್ಣಿ ಕೃಷ್ಣನ್ ಹಾಗೂ ವಿದ್ಯಾರ್ಥಿಗಳು   ಸಹಕರಿಸಿದರು.



Thursday, August 15, 2019

ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ದ್ವಜಾರೋಹಣ ಗೈದರು.ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಳ ದ ಅಗ್ನಿ ಶಾಮಕದಳದ ಸಹ ಅಧಿಕಾರಿಯಾದ ಶ್ರೀ ಎ.ಟಿ ಜೋರ್ಜ್ ಅವರು ಸ್ವಾತಂತ್ರ್ಯ ದ ಮಹತ್ವ ಹಾಗೂ ಅಗ್ನಿ ಶಾಮಕದಳದ ರಕ್ಷಣಾ ಕಾರ್ಯ ದ ಬಗ್ಗೆ ತಿಳಿಸಿದರು.
ಕಾರ್ಯ ಕ್ರಮ ದಲ್ಲಿ ಉಪಸ್ತಿತರಿದ್ದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಉಳುವಾನ ಶ್ರೀ ರಾಮಚಂದ್ರ ಭಟ್ ಮಾತನಾಡಿ ಸ್ವಾತಂತ್ರ್ಯ ಬಲಿದಾನಿಗಳಾದ ದೇಶಪ್ರೇಮಿಗಳನ್ನು ನೆನೆದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಪ್ರಸ್ತಾವಿಕವಾಗಿ ಮಾತನಾಡಿದರು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದರು.ಶಾಲಾ ವ್ಯವಸ್ಥಾಪಕ ರಾದ ಶ್ರೀ ಶಂಕರನಾರಾಯಣ ಭಟ್ ,ಹೈಯರ್ ಸೆಕಂಡರಿ ಶಾಲೆಯ ಅದ್ಯಾಪಕ ರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು ಶುಭಾಶಂಸನೆ ಗೈದರು .
ಅದ್ಯಾಪಕರಾದ ಶ್ರೀ ಗೋವಿಂದ ಭಟ್ ನಿರೂಪಿಸಿ ಶ್ರೀ ಶಿವಪ್ರಸಾದ್ ಚೆರುಗೋಳಿ ವಂದಿಸಿದರು.










Friday, August 09, 2019

ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈ ಅವರ ಸಂಸ್ಮರಣ ಕಾರ್ಯಕ್ರಮವು ತಾ 9.8.2019ನೇ ಶುಕ್ರವಾರ ಅಪರಾಹ್ನ 3.00ಕ್ಕೆ ಸರಿಯಾಗಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಜರಗಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನ ಯಶಸ್ಸು ಗೊಳಿಸಿದರು.







Tuesday, August 06, 2019

ನಮ್ಮ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ದಿ. ನೇರೋಳು ನಿಡುವಜೆ ರಾಮಚಂದ್ರ ಭಟ್ ಮತ್ತು ದಿ.ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.








Thursday, August 01, 2019

Ramayanaprashnotthari


Tuesday, July 16, 2019


ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಂಸ್ಕøತ ಸಂಘದ ಆಶ್ರಯದಲ್ಲಿ ಸಂಸ್ಕøತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುರುಪೌರ್ಣಿಮೆ ಉತ್ಸವವನ್ನು ಮಂಗಳವಾರ ಆಚರಿಸಲಾಯಿತು.
      ಕಾರ್ಯಕ್ರಮವನ್ನು ಹೈಯರ್ ಸೆಕೆಂಡರಿ ಅಧ್ಯಾಪಕ ಸತೀಶ ಶೆಟ್ಟಿ ಒಡ್ಡಂಬೆಟ್ಟು ಉದ್ಘಾಟಿಸಿ ಮಾತನಾಡಿ, ಗು ಎಂದರೆ ಕತ್ತಲು, ರು ಎಂದರೆ ಬೆಳಕು ಎಂದರ್ಥ. ತಲತಲಾಂತರಗಳಿಂದ ಬಂದ ಸಂಪ್ರದಾಯವಾದ ಗುರುಗಳನ್ನು ಗೌರವಿಸುವ ರೀತಿ ನಮ್ಮ ಇಂದಿನ ಶಿಕ್ಷಣ ರೀತಿಯಲ್ಲಿ ಬರಬೇಕು ಎಂದರು.
        ಶಾಲಾ ಮುಖ್ಯಶಿಕ್ಷಕ ಎನ್. ರಾಮಚಂದ್ರ ಭಟ್ ಶುಭಾಶಂಸನೆಗೈದು ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಬದಲಾಗಿ ಶಾಲೆಯಲ್ಲಿಯೂ ಕೂಡಾ ಗುರುಗಳನ್ನು ಶಿಷ್ಯರು ಪೂಜನೀಯ ಮನೋಭಾವದಿಂದ ಗೌರವಿಸುವಂತೆ ಆಗಬೇಕು. ಈ ತಿಂಗಳ ಪೂರ್ತಿ ಹಲವೆಡೆಗಳಲ್ಲಿ ದೇವರನ್ನು ಪೂಜಿಸುತ್ತಾರೆ. ಕೇರಳದಲ್ಲಿ ರಾಮಾಯಣ ಪಾರಾಯಣ ಮಾಡುತ್ತಾರೆ. ಹಾಗಾಗಿ ರಾಮಾಯಣ ಮಾಸಾಚರಣೆ ಅಂತ ಈ ತಿಂಗಳು ಪೂರ್ತಿ ತಿಳಿಯಲ್ಪಡುತ್ತದೆ ಎಮದು ತಿಳಿಸಿದರು.
      ಹಿರಿಯ ಅಧ್ಯಾಪಕ ಗೋವಿಂದ ಭಟ್ ಶುಭಾಶಂಸನೆಗೈದು ಮಾತನಾಡಿದರು. ಸಂಸ್ಕøತ ಅಧ್ಯಾಪಕ ಶಿವನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ತಿಂಗಳಪೂರ್ತಿ ನಡೆಸಲಿರುವ ಶ್ರೀ ರಾಮರಕ್ಷಾ ಸ್ತೋತ್ರ ಪಠಣಕ್ಕಿರುವ ರಾಮರಕ್ಷಾ ಸ್ತೋತ್ರ ಪುಸ್ತಕವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
     ಶಾರದ ಸುರಭಿ ಸ್ವಾಗತಿಸಿ, ಸಂಸ್ಕøತ ಸಂಘದ ಜೊತೆ ಕಾರ್ಯದರ್ಶಿ ಅಕ್ಷಯ ಗಣಪತಿ ವಂದಿಸಿದರು. ಸಂಸ್ಕøತ ಸಂಘದ ಕಾರ್ಯದರ್ಶಿ ವಿಶ್ವಜಿತ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ ಕಾರ್ಯಕ್ರಮಕ್ಕೆ ಸಹಕರಿಸಿತ್ತು.