Sunday, December 04, 2016

ಧರ್ಮತ್ತಡ್ಕ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಪತ್ರಿಕಾ ವರದಿಗಳು

















Saturday, November 26, 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ


ಧರ್ಮತಡ್ಕಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಹಯರ್ ಸಕೆಂಡರಿ ಶಾಲೆ ಮತ್ತು ಎ ಯು ಪಿ ಶಾಲೆಯಲ್ಲಿ ಶನಿವಾರ ಆರಂಭಗೊಂಡಿತು. ಎಲ್ ಪಿ, ಯುಪಿ, ಹೈಸ್ಕೂಲ್ ಮತ್ತು ಹಯರ್ ಸೆಕೆಂಡರಿ ವಿಭಾಗಗಳ ವೇದಿಕೆಯೇತರ ಸ್ಪರ್ಧೆಗಳಲ್ಲಿ ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನವೆಂಬರ್ 29ರಂದು ಉದ್ಘಾಟನೆ ನಡೆಯಲಿದ್ದು ವೇದಿಕೆಯ ಕಲಾ ಸ್ಪರ್ಧೆಗಳು ನಡೆಯಲಿದೆ.


ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ

ಧರ್ಮತಡ್ಕ : ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ನವೆಂಬರ್ 26 ಶನಿವಾರದಂದು ಚಾಲನೆ ದೊರೆತಿದ್ದು ಕಲಾಮೇಳದಲ್ಲಿ ದುಡಿಯುತ್ತಿರುವ ಸ್ವಯಂ ಸೇವಕರಿಗೆ ಸಮವಸ್ತ್ರಗಳನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ಬಿಡುಗಡೆಗೊಳಿಸಿದರು. ಶರಣಂ ಕನ್ಸ್ಟ್ರಕ್ಷನ್ ಪುತ್ತೂರು, ಸ್ಪೋರ್ಟ್ಸ್ ಲೈನ್ ಪುತ್ತೂರು ಹಾಗೂ ಶ್ರೀವತ್ಸ ಮತ್ತು ಗೆಳೆಯರು ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಿಸ್ತು ಪಾಲನಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮವು ಜರಗಿತು. ಸಂಘಟಕ ಸಮಿತಿ ಸಂಚಾಲಕರಾದ ಎನ್ ರಾಮಚಂದ್ರ ಭಟ್, ಟಿಡಿ ಸದಾಶಿವ ರಾವ್, ರಾಮಮೋಹನ ಸಿಎಚ್, ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Wednesday, November 23, 2016

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ಸಭೆ

ಧರ್ಮತಡ್ಕ: ಈ ತಿಂಗಳ 26ರಿಂದ 30ರ ತನಕ ಧರ್ಮತಡ್ಕ ದುರ್ಗಾ ಪರಮೇಶ್ವರೀ ಹಯರ್ ಸೆಕೆಂಡರಿ ಶಾಲೆ ಮತ್ತು ಎಯುಪಿ ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಕಾರ್ಯಕ್ರಮ  ಸಮಿತಿ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಹಯರ್ ಸೆಕೆಂಡರಿ ಶಾಲಾ ಮೇನೇಜರ್ ಶ್ರೀ ನೇರೋಳು ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕರು ಹಾಗೂ ಪ್ರಾಂಶುಪಾಲರಾದ  ಶ್ರೀ ಎನ್ ರಾಮಚಂದ್ರ ಭಟ್ ಶುಭಹಾರೈಕೆ ಮಾಡಿದರು. ಕಾರ್ಯಕ್ರಮ ಸಮಿತಿ ಸಹಸಂಚಾಲಕರಾದ  ಶ್ರೀ ಶ್ರೀನಿವಾಸ್ ಕೆ.ಎಚ್ ಸ್ವಾಗತಿಸಿ, ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎನ್ ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕರಾದ ಶ್ರೀ ಸತೀಶ್ ಕುಮಾರ್ ಒ ನಿರೂಪಿಸಿದರು. ಸಮಿತಿ ಸದಸ್ಯರು ಉಪಸ್ಥಿತರಿದ್ದರು.